ಚಿತ್ರದುರ್ಗ,ಡಿ.7-ನೀಡಿದ ಸಾಲ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.ಮಹಮದ್ ಅಜರ್(28) ಕೊಲೆಯಾದ ವ್ಯಕ್ತಿ. ನಗರದ ಹೊರಪೇಟೆ ನಿವಾಸಿಯಾದ ಮಹಮ್ಮದ್ ಅಜರ್ ಮುಬಾರಕ್, ಪ್ರದೀಪ್ ಹಾಗೂ ಬಾಬು ಅವರ ಮಧ್ಯ ಹಣದ ವ್ಯವಹಾರ ನಡೆದಿತ್ತು ಎನ್ನಲಾಗಿದೆ. ನಿನ್ನೆಕೊಟ್ಟ ಸಾಲದ ಹಣ ವಾಪಸ್ ಕೊಡುವಂತೆ ಕೇಳಿದದ್ದಕ್ಕೆ , ಹಣ ವಾಪಸ್ ಕೊಡುವುದಾಗಿ ಹೇಳಿ ಕರೆಸಿಕೊಂಡ ಆರೋಪಿಗಳು ಕಲ್ಲು, ಮಚ್ಚಿನಿಂದ ಮಹಮ್ಮದ್ ಅಜರ್ನನ್ನು ಕೊಚ್ಚಿ ಕೊಲೆ ಮಾಡಿ, ನಗರದ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜ್ ಆವರಣದ ಬಳಿ ಶವ ಎಸೆದಿದ್ದಾರೆ.
ನಂತರಆರೋಪಿಗಳುವಿದ್ಯಾನಗರಠಾಣೆಗೆಹೋಗಿಶರಣಾಗಿದ್ದಾರೆ. ಸ್ಥಳಕ್ಕೆನಗರಪೊಲೀಸ್ಠಾಣೆಇನ್ಸ್ಪೆಕ್ಟರ್ನಯಿಮ್ಭೇಟಿನೀಡಿಪರಿಶೀಲನೆನಡೆಸಿ, ಮುಂದಿನಕ್ರಮಕೈಗೊಂಡಿದ್ದಾರೆ. ಚಿತ್ರದುರ್ಗನಗರಠಾಣೆಯಲ್ಲಿಈಸಂಬಂಧದೂರುದಾಖಲಾಗಿದೆ.