ಕೇಂದ್ರ ಉಕ್ಕು ಖಾತೆ ಸಚಿವರ ಚಿಕ್ಕಮಗಳೂರು ಜಿಲ್ಲಾ ಪ್ರವಾಸ

ಚಿಕ್ಕಮಗಳೂರು.ಫೆ,21 : ಭಾರತ ಸರ್ಕಾರದ ಉಕ್ಕು ಖಾತೆ ಸಚಿವ ಶ್ರೀ ರಾಮ್ ಚಂದ್ರ ಪ್ರಸಾದ್ ಸಿಂಗ್ ಅವರು 2 ದಿನಗಳ ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅವರು ಭಾನುವಾರ ಸಂಜೆ ಕುದುರೆಮುಖ ಕ್ಕೆ ಆಗಮಸಿ ವಾಸ್ತವ್ಯ ಹೂಡಿದ್ದು ಇಂದು ಬೆಳಗ್ಗೆ ಕುದುರೆಮುಖ ಸಮೀಪದ ಲಕ್ಯಾ ಡ್ಯಾಮ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ಸಚಿವರು ಶೃಂಗೇರಿಯ ಶಾರದಾಂಬ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡರು. ಇಂದು ಸಂಜೆ ಮಂಗಳೂರು ಮೂಲಕ ದೆಹಲಿಗೆ ತೆರಳಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top