ಬೇಲೂರು : ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಇಲ್ಲಿನ ಪಿಯು ವಿದ್ಯಾರ್ಥಿಯೋರ್ವ ಶಿವ, ವ್ಯಕ್ತಿಚಿತ್ರ, ಸುಭಾಷಚಂದ್ರಬೋಸ್, ಉಪೇಂದ್ರ, ದರ್ಶನ್ ಸೇರಿದಂತೆ ಹಲವರ ಭಾವಚಿತ್ರವನ್ನು ಪೆನ್ಸಿಲ್ನಿಂದ ರಚಿಸಿದ್ದಾನೆ. ಚಿಕ್ಕಂದಿನಿoದಲೇ ಹವ್ಯಾಸಕ್ಕಾಗಿ ಪೆನ್ಸಿಲ್ ಹಿಡಿದು ಗೀಚುತ್ತಿದ್ದ ವಿದ್ಯಾರ್ಥಿ ಬಿ.ಆರ್.ಪ್ರಜ್ವಲ್, ಇಲ್ಲಿನ ಕೆಂಪೇಗೌಡರ ರಸ್ತೆಯಲ್ಲಿರುವ ಪತ್ರಕರ್ತ ಹಾಗೂ ಎಪಿಎಂಸಿ ಮಾಜಿ ಸದಸ್ಯ ಪೈಂಟ್ರವಿ ಅವರ ಪುತ್ರ. ಇದೀಗ ಈ ವಿದ್ಯಾರ್ಥಿ ಹಾಸನದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು ಬಿಡುವಿನ ವೇಳೆಯಲ್ಲಿ ಈ ಚಿತ್ರಗಳ ರಚಿಸಿದ್ದಾನೆ.
ಭಾವಚಿತ್ರ ರಚನೆಯ ಇದು ಆರಂಭವಾದರೂ ನೋಡುಗರ ಹಿತಕಾಯುತ್ತದೆ. ಭವಿಷ್ಯದಲ್ಲಿ ಈ ಯುವ ಪ್ರತಿಭೆ ಏನನ್ನಾದರೂ ಸಾಧಿಸಬಲ್ಲ ಎನ್ನುವ ಭಾವನೆ ವ್ಯಕ್ತವಾಗುತ್ತದೆ. ಕಲೆ, ಸಾಹಿತ್ಯ, ರಾಜಕಾರಣ ಸೇರಿದಂತೆ ಕೆಲವೊಂದು ಕ್ಷೇತ್ರದಲ್ಲಿ ವಂಶಪಾರ0ರ್ಯ ಇರುತ್ತದೆ ಎನ್ನುವುದಕ್ಕೆ ಈ ಪ್ರಜ್ವಲ್ ಸಾಕ್ಷಿಯಾಗುತ್ತಾನೆ. ಕಾರಣ, ಈತನ ತಂದೆ ಪೈಂಟ್ರವಿ ಕೂಡ ಕುಂಚ ಕಲಾವಿದರಾಗಿದ್ದರು. ಈ ಬಾಲಕನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಅಂತರಾಷ್ಟಿಯ ಚಿತ್ರಕಲಾ ಪ್ರಶಸ್ತಿ ವಿಜೇತ ಶಿಕ್ಷಕ . ಈ ವಿದ್ಯಾರ್ಥಿ ಆರಂಭದಲ್ಲೇ ಅದ್ಭುತ ಪ್ರತಿಭೆ ಹೊರಹೊಮ್ಮಿಸಿದ್ದಾನೆ. ಪೆನ್ಸಿಲ್ ಇಂದ ರಚಿಸುವ ಚಿತ್ರಗಳು ಭಾವಚಿತ್ರವಾಗಲಿದ್ದು, ಭವಿಷ್ಯದಲ್ಲಿ ಒಂದಿಷ್ಟು ತರಬೇತಿ ಪಡೆದಲ್ಲಿ ಚಿತ್ರಕಲಾ ರಂಗದಲ್ಲಿ ಸಾಧನೆ ಮಾಡುವ ಅಗಾಧತೆ ಆತನಲ್ಲಿದೆ ಎಂದು ಹರಿಸಿದ್ದಾರೆ. ಈತನ ಚಿತ್ರರಚನೆ ಆರಂಭದ ಕೃಷಿ ನಿರಂತರವಾಗಿರಲಿ ಎಂದು ಪತ್ರಿಕೆ ಹಾರೈಸುತ್ತದೆ.