ಅಗತ್ಯ ವಸ್ತುಗಳ ಕಿಟ್ ವಿತರಣೆ

ಮರಿಯಮ್ಮನಹಳ್ಳಿ,ಫೆ,27 : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಪಟ್ಟಣ ಸಮೀಪದ ಗುಂಡಾ ಗ್ರಾಮದ ನಿರ್ಗತಿಕರಿಗೆ ದಿನಬಳಕೆಯ ಅಗತ್ಯ ವಸ್ತುಗಳ ಕಿಟ್ ವಿತರಣೆ ಮಾಡಲಾಯಿತು. ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ದಿ ಸಂಸ್ಥೆಯ ಹೊಸಪೇಟೆ ತಾಲೂಕಿನ ಯೋಜನಾಧಿಕಾರಿ ರಾಘವೇಂದ್ರ ನಾಯ್ಕ್ ಮಾತನಾಡಿ,  ಧರ್ಮದರ್ಶಿಗಳಾದ ಶ್ರೀ ವೀರೇಂದ್ರ ಹೆಗಡೆ ಅವರ ಸಂಕಲ್ಪದಂತೆ  ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಆಯ್ದ ನಿರ್ಗತಿಕರಿಗೆ ಅಗತ್ಯ ದಿನಬಳಕೆಯ ವಸ್ತುಗಳನ್ನು ಒಳಗೊಂಡ ಕಿಟ್ ನ್ನು  ವಿತರಣೆ ಮಾಡಲಾಯಿತು.

ಮರಿಯಮ್ಮನಹಳ್ಳಿ ಪಟ್ಟಣ ಮತ್ತು ಗುಂಡಾ ಗ್ರಾಮ ಸೇರಿದಂತೆ 12 ಜನ ನಿರ್ಗತಿಕರಿಗೆ ಈ ಕಿಟ್ ಗಳ ವಿತರಣೆ ಮಾಡಲಾಗಿದೆ ಎಂದರು. ಇದರೊಂದಿಗೆ ನಿರ್ಗತಿಕರಿಗೆ ಹಣಕಾಸಿನ ಸಹಾಯವನ್ನೂ ಸಂಸ್ಥೆಯಿಂದ ಮಾಡಲಾಗುತ್ತಿದೆ. ಅಗತ್ಯ ಔಷಧೋಪಚಾರಗಳನ್ನೂ ಕೊಂಡುಕೊಳ್ಳಲು ಇದು ಸಹಾಯಕವಾಗಲಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಕೆ.ಚಿದಾನಂದ, ಮುಖಂಡರಾದ ಡಣಾಯಕನಕೆರೆ ಗ್ರಾಪಂ ಸದಸ್ಯ ಗುಂಡಾ ಸೋಮಣ್ಣ,  ಪೊಲೀಸ್ ಇಲಾಖೆಯ ರಾಮಕೃಷ್ಣ ವರ್ತಕ ಡಿ.ರಾಘವೇಂದ್ರಶೆಟ್ಟಿ ಹಾಗೂ ಸಂಸ್ಥೆಯ ಗೌರಮ್ಮ, ಅಂಜಲಿ ಮತ್ತು ಸಿಬ್ಬಂದಿಗಳು‌ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top