LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Entertainment News

ಸಾಲು, ಸಾಲು ಚಿತ್ರಗಳು: ಆದರೆ ಗೆದ್ದಿದ್ದು ಮಾತ್ರ ಕಡಿಮೆ

ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ತಿರುಗಿ ನೋಡಿದರೆ ಚಿತ್ರರಂಗದಲ್ಲಿ ಸಾಕಷ್ಟು ಘಟನೆಗಳು ನಡೆದು ಹೋಗಿವೆ. ಜನವರಿಯಿಂದ ಡಿಸೆಂಬರ್ ವರೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆಯನ್ನು ಒಟ್ಟರು 226.
ಆದರೆ, ಕನ್ನಡ ಚಿತ್ರರಂಗದ ಮಟ್ಟಿಗೆ ಈ ವರ್ಷ ಅಂತಹ ಹೇಳಿಕೊಳ್ಳುವಂತಹ ಸಂಭ್ರಮವಿಲ್ಲ. ಭರಪೂರ ಚಿತ್ರಗಳು ತೆರೆ ಕಂಡರೂ ಯಶಸ್ಸು ಸಾಧಿಸಿದ್ದು ಮಾತ್ರ ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ. 2025ರ ಪ್ರಥಮಾರ್ಧ ಪ್ರಮುಖ ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ಇಲ್ಲದೆ, ಕಳೆದು ಹೋಗಿತ್ತು.
ವರ್ಷದ ಆರಂಭದಲ್ಲಿ ಶರಣ್ ಅಭಿನಯದ ಛೂ ಮಂತರ್, ಶ್ರೀನಗರ ಕಿಟ್ಟಿ ಹಾಗೂ ರಚಿತಾರಾಮ್ ಅವರ ಸಂಜು ವೆಡ್ಸ್ ಗೀತಾ-2, ರಾಘವೇಂದ್ರ ರಾಜ್ ಕುಮಾರ್ ನಟಿಸಿದ್ದ ಕಣ್ಣ ಮಚ್ಚೆ ಕಾಡೆ ಗೂಡೆ, ಪ್ರಜ್ವಲ್ ದೇವರಾಜ್ ಅಭಿನಯದ ಗಣ, ದೀಪಿಕಾ ದಾಸ್ ಅಭಿನಯದ ಪರು ಪಾರ್ವತಿ ಚಿತ್ರಗಳು ಬಿಡುಗಡೆಯಾದವು. ಆದರೆ, ಸಂಜು ವೆಡ್ಸ್ ಗೀತಾ-2 ಕೂಡಾ ಪ್ರೇಕ್ಷಕರ ಮನ ಸೆಳೆಯುವಲ್ಲಿ ವಿಫಲವಾಯಿತು.
ಇನ್ನೂ ಫೆಬ್ರವರಿಯಲ್ಲಿ ಯೋಗೇಶ್, ಸೋನು ಗೌಡ ಅಭಿನಯದ ಸಿದ್ಲಿಂಗು-2, ರೂಪೇಶ್ ಶೆಟ್ಟಿ, ಜಾನ್ವಿಯ ಅಧಿಪಾತ್ರ, ರಾಘವ ಅನ್ ಲಾಕ್ ಮಾಡಿ ಮತ್ತಿತರ ಚಿತ್ರಗಳು ಬಿಡುಗಡೆಯಾದವು.
ಇದೇ ಕಾರಣಕ್ಕೆ ಮೊದಲ ಐದಾರು ತಿಂಗಳು ಚಿತ್ರಮಂದಿರಗಳು ಬಿಕೋ ಎನ್ನುತ್ತಿದ್ದವು. ಆದರೆ, ಎರಡನೇ ಅವಧಿಯಲ್ಲಿ ಪ್ರಮುಖರ ಸಾಲು ಸಾಲು ಚಿತ್ರಗಳು ತೆರೆಗೆ ಅಪ್ಪಳಿಸಿದ್ದವು. ವಿಶ್ವಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾಗಳು: ನಿರೀಕ್ಷೆಯಂತೆ ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಕಾಂತಾರ ಚಾಪ್ಟರ್ -1 ಸಿನಿಮಾ ವಿಶ್ವಮಟ್ಟದಲ್ಲಿ ಸದ್ದು ಮಾಡುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ 850 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದರೆ ಓಟಿಟಿ ಸೇರಿದಂತೆ ಇತರ ಮೂಲಗಳಿಂದ 200 ಕೋಟಿ ರೂ. ಗೂ ಅಧಿಕ ವ್ಯವಹಾರ ಮಾಡಿದೆ. ಇದರಿಂದಾಗಿ ಈ ಚಿತ್ರ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಅದನ್ನು ಹೊರತುಪಡಿಸಿದರೆ ಈ ವರ್ಷ ಅನಿರೀಕ್ಷಿತವಾಗಿ ಸದ್ದು ಮಾಡಿದ ಚಿತ್ರವೆಂದರೆ, 'ಸು ಫ್ರಮ್ ಸೋ' ರಾಜ್ ಬಿ ಶೆಟ್ಟಿ ನಾಯಕ ನಟರಾಗಿ ಅಭಿನಯಿಸಿದ ಈ ಸಿನಿಮಾ ಕೇವಲ 3 ರಿಂದ 4 ಕೋಟಿ ರೂ. ಬಜೆಟ್ ನಲ್ಲಿ ತಯಾರಾಗಿತ್ತು. ಆದರೆ ಈ ಚಿತ್ರ ಹಾಗೆಯೇ ಬಾಯಿ ಮಾತಿನ ಮೂಲಕ ಪ್ರಚಾರಗೊಂಡು 125 ಕೋಟಿ ರೂ. ಕಲೆಕ್ಷನ್ ನೊಂದಿಗೆ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಜೊತೆಗೆ ಟಿವಿ, ಓಟಿಟಿ ಸೇರಿದಂತೆ 10 ಕೋಟಿ ರೂ. ಕಲೆಕ್ಷನ್ ಮಾಡಿತು.
ಸ್ಟಾರ್ ನಟರ ಸಿನಿಮಾಗಳಿಲ್ಲದೇ ಸೊರಗಿದ ಚಿತ್ರರಂಗ: ಈ ವರ್ಷ ರಾಕಿಂಗ್ ಸ್ಟಾರ್, ಯಶ್, ಗೋಲ್ಡನ್ ಸ್ಟಾರ್ ಗಣೇಶ್, ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ಶ್ರೀ ಮುರುಳಿ ಸಿನಿಮಾಗಳು ಬರಲಿಲ್ಲ. ಇನ್ನೂ ಛೂ ಮಂತರ್, ಅಜ್ಞಾತವಾಸಿ, ಯುದ್ಧ ಕಾಂಡ, ಎಕ್ಕ, ಏಳುಮಲೆ, ಮಹಾದೇವ ಮತ್ತಿತರ ಸಿನಮಾಗಳು ನಿರ್ಮಾಪಕರು ಹಾಕಿದ ಹಣ ವಾಪಸ್ ತಂದುಕೊಟ್ಟಿವೆ. ಆದರೆ ಬಹುನಿರೀಕ್ಷಿತ ಚಿತ್ರಗಳಾದ ಶ್ರೀನಗರ ಕಿಟ್ಟಿ ಅಭಿನಯದ ಸಂಜು ವೆಡ್ಸ್ ಗೀತಾ-2, ವಿನಯ್ ರಾಜ್ ಕುಮಾರ್ ಅಭಿಯನದ ಎಕ್ಕ ಮತ್ತಿತರ ಚಿತ್ರಗಳು ಹೆಸರು ಮಾಡಿದವಷ್ಟೇ ಹೊರತು ಯಶಸ್ಸು ಸಾಧಿಸಲಾಗಲಿಲ್ಲ.
ವಿಮರ್ಶಕರಿಂದ ಮೆಚ್ಚುಗೆ ಪಡೆದ ಸಿನಿಮಾಗಳು: ಈ ವರ್ಷ ತೆರೆಕಂಡ ಸಿನಿಮಾಗಳಲ್ಲಿ ಎಕ್ಸ್ ವೈ, ಫುಲ್ ಮೀಲ್ಸ್, ಕೈಟ್ ಬ್ರದರ್ಸ್, ವಿಷ್ಣು ಪ್ರಿಯಾ ಮತ್ತಿತರ ಅನೇಕ ಸಿನಿಮಾಗಳು ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದು, ಒಟಿಟಿ ವೇದಿಕೆಯಲ್ಲಿ ನೇರವಾಗಿ ಏಳು ಚಿತ್ರಗಳು ಬಿಡುಗಡೆಯಾಗಿವೆ.
ವರ್ಷಾಂತ್ಯದಲ್ಲಿ ಡಬಲ್ ಧಮಕಾ: ವರ್ಷಾಂತ್ಯದಲ್ಲಿ ಡಿಸೆಂಬರ್ 11 ರಂದು ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಡೆವಿಲ್' ಜನರನ್ನು ಮತ್ತೆ ಥಿಯೇಟರ್ ನತ್ತ ಕರೆದುಕೊಂಡು ಬಂದಿತು. ದರ್ಶನ್ ಜೈಲಿನಲ್ಲಿದ್ದರೂ ಅಭಿಮಾನಿಗಳ ಜಾತ್ರೆಗೆ ಬರ ಇರಲಿಲ್ಲ. ಈ ಚಿತ್ರ ಒಟ್ಟಾರೆ 34 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಇನ್ನೂ ಕೊನೆಯ ವಾರದಲ್ಲಿ ಡಾ. ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ 45 ಹಾಗೂ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಚಿತ್ರಗಳು ಬಿಡುಗಡೆಯಾಗಿದ್ದು, ಕನ್ನಡ ಸಿನಿ ರಸಿಕರ ಮನರಂಜಿಸಿದವು. ಅರ್ಜುನ್ ಜನ್ಯಾ ನಿರ್ದೇಶಕನಾಗಿ ಚೊಚ್ಚಲ ಚಿತ್ರದಲ್ಲಿ ಗೆದ್ದಿದ್ದು, ಈ ಚಿತ್ರ ಈವರೆಗೂ ಸುಮಾರು 15 ಕೋಟಿ ಕಲೆಕ್ಷನ್ ಮಾಡಿದ್ದರೆ, ಸುದೀಪ್ ಅಭಿನಯದ ಮಾರ್ಕ್ 34 ಕೋಟಿ ಸಂಗ್ರಹಿಸಿದೆ.
ಗಮನ ಸೆಳೆದ ನಟಿಯರು: ರುಕ್ಮೀಣಿ ವಸಂತ್ (ಕಾಂತಾರ-1) ಪ್ರಿಯಾಂಕ್ ಆಚಾರ್ (ಏಳು ಮಳೆ) ಖುಷಿ ರವಿ (ಫುಲ್ ಮೀಲ್ಸ್ ) ಸಂಜನಾ ದಾಸ್ ಮಲೈಕಾ (ವಿದ್ಯಾಪತಿ) ಆರ್ಚನಾ ಜೋಯಿಸ್ (ಯುದ್ಧ ಕಾಂಡ) ಸಂಪದಾ (ಎಕ್ಕ) ಜಿ.ಎಸ್.ಟಿಯಲ್ಲಿ ಚಮೇಲಿಯಾಗಿ ಕುಣಿದಿದ್ದ ಸಂಹಿತಾ ವಿನ್ಯಾ ಮತ್ತಿತರ ನಟಿಯರು ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
ಅಗಲಿದ ನಟ, ನಿರ್ದೇಶಕರು: 2025ರಲ್ಲಿ ಕನ್ನಡ ಚಿತ್ರರಂಗ ಅನೇಕ ಕಲಾವಿದರನ್ನು ಕಳೆದುಕೊಂಡಿತು. ಹಿರಿಯ ಕಲಾವಿದರಾದ ಬಿ. ಸರೋಜಾ ದೇವಿ, ಬ್ಯಾಂಕ್ ಜನಾರ್ದನ್, ಹರೀಶ್ ರೈ, ಉಮೇಶ್, ಯಶವಂತ ಸರದೇಶಪಾಂಡೆ, ದಿನೇಶ್ ಮಂಗಳೂರು, ನಿರ್ದೇಶಕ ಡೇವಿಡ್, ಸರಿಗಮ ವಿಜೆ, ರಾಕೇಶ್ ಪೂಜಾರಿ, ಸಂತೋಷ್ ಬಾಲರಾಜ್, ಶ್ರೀಧರ್ ಸೇರಿದಂತೆ ಇನ್ನೂ ಅನೇಕರು ಈಗ ನೆನಪು ಮಾತ್ರ.
2026 ರಲ್ಲಿ ಸ್ಟಾರ್ ಚಿತ್ರಗಳ ಅಬ್ಬರ:
ವರ್ಷಾರಂಭದಲ್ಲಿ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಲ್ಯಾಂಡ್ ಲಾರ್ಡ್ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಕಾಟೇರ ಸಿನಿಮಾಗೆ ಕಥೆ ಬರೆದಿದ್ದ ಜಡೇಜ ಕೆ. ಹಂಪಿ ನಿರ್ದೇಶನದ ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಜನವರಿ 23ಕ್ಕೆ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಟಾಕ್ಸಿಕ್ 2026ರ ಮಾರ್ಚ್ 19ಕ್ಕೆ ತೆರೆ ಬರುವ ಸಾಧ್ಯತೆಯಿದೆ. ಇದರೊಂದಿಗೆ ಅವರು 2022ರ ನಂತರ ಇದೇ ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧ್ರುವ ಸರ್ಜಾ ನಟನೆಯ ಪ್ರೇಮ್ ನಿರ್ದೇಶನದ ಕೆ.ಡ಼ಿ. ಸಿನಿಮಾದ ಮೇಲೆ ಬಹು ನಿರೀಕ್ಷೆ ಹುಟ್ಟಿಸಿದೆ. ವಿಎನ್ ಪ್ರೊಡಕ್ಷನ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರವಿಚಂದ್ರನ್, ಸಂಜಯ್ ದತ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ ಕೂಡಾ ನಟಿಸಿದ್ದಾರೆ.

 

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ