ಬಳ್ಳಾರಿ : ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲ ಕೋಟೆ ಬಳಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ, ಪ್ರಾಗೈ ತಿಹಾಸಿಕ ಕಾಲಕ್ಕೆ ಸೇರಿದ ಎರಡು ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಅಮೆರಿಕಾದ ಹಾರ್ಟ್ವಿಕ್ ವಿಶ್ವವಿದ್ಯಾ ಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ತಂಡದ ಸಹ ನಿರ್ದೇಶಕಿ ಪೆÇ್ರ. ನಮಿತಾ ಎಸ್. ಸುಗಂಧಿ ನೇತೃತ್ವದ ಸಂಶೋ ಧಕರ ತಂಡವು ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ಬಳಿ ಈ ಉತ್ಖನನ ಕಾರ್ಯವನ್ನು ನಡೆಸುತ್ತಿದೆ.
ಈ ಉತ್ಖನನದಲ್ಲಿ ಸುಮಾರು 5.5 ಅಡಿ ಉದ್ದದ ಎರಡು ಸಂಪೂರ್ಣ ಮಾನವ ಅಸ್ಥಿ ಪಂಜರಗಳು ಒಂದರ ಪಕ್ಕ ದಲ್ಲೊಂದು ಪತ್ತೆಯಾಗಿದ್ದು, ಇವು ಸುಮಾರು 3,000 ರಿಂದ 5,000 ವರ್ಷಗಳಷ್ಟು ಹಳೆಯದೆಂದು ಅಂದಾಜಿ ಸಲಾಗಿದೆ. ಇವುಗಳ ಸುತ್ತ ಮುತ್ತ ಮಡಿಕೆ ಚೂರುಗಳು, ಸೂಕ್ಷ್ಮ ಶಿಲಾಯುಗದ ಅವಶೇಷಗಳು ದೊರೆತಿದ್ದು, ಇದು ನವಶಿಲಾಯುಗ ಅಥವಾ ಪ್ರಾಗೈತಿಹಾಸಿಕ ಕಾಲದ ಪ್ರಮುಖ ಮಾನವ ನೆಲೆ ಯಾಗಿತ್ತು ಎಂಬುದಕ್ಕೆ ಸಾಕ್ಷಿ ದೊರೆತಂತಾಗಿದೆ.
ಪ್ರಾಗೈತಿಹಾಸಿಕ ಕಾಲದ ಜನಜೀವನದ ಮೇಲೆ ಹೆಚ್ಚಿನ ಬೆಳಕು..
ಅಸ್ಥಿಪಂಜರಗಳು ಯಾವುದೇ ರೀತಿಯಲ್ಲಿ ಹಾಳಾಗದೆ ಉತ್ತ ಮ ಸ್ಥಿತಿಯಲ್ಲಿ ದೊರೆತಿದ್ದು, ಮೃತದೇಹಗಳ ಮೇಲೆ ಕಲ್ಲು ಗಳನ್ನು ಇಟ್ಟು ಶವಸಂಸ್ಕಾರ ಮಾಡಿದ ಪದ್ಧತಿಯ ಸ್ಪಷ್ಟ ಕುರುಹುಗಳು ಕಂಡುಬಂದಿವೆ. ಪಳೆಯುಳಿಕೆಗಳ ಸುತ್ತ ಮಡಿಕೆ ಚೂರುಗಳು, ಸೂಕ್ಷ್ಮ ಶಿಲಾ iÀುುಗದ ಅವಶೇಷಗಳು ಹಾಗೂ ಮಾನವ ಆಯುಧ ಬಳಕೆಗೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ. ಇದರಿಂದ ಇದು ನವಶಿಲಾಯುಗ ಅಥವಾ ಪ್ರಾಗೈತಿಹಾಸಿಕ ಕಾಲದ ಪ್ರಮುಖ ಮಾನವ ನೆಲೆ ಆಗಿರ ಬಹುದೆಂದು ತಜ್ಞರು ಅಂದಾ ಜಿಸಿದ್ದಾರೆ.
ನಿಖರ ಕಾಲಾವಧಿಗಾಗಿ ಕಾರ್ಬನ್ ಡೇಟಿಂಗ್
ಪತ್ತೆಯಾದ ಅಸ್ಥಿಪಂಜರಗಳು ಅಂದಾಜು 3,000 ರಿಂದ 5,000 ವರ್ಷಗಳ ಹಿಂದಿ ನವು ಆಗಿರಬಹುದೆಂದು ಹೇಳ ಲಾಗಿದ್ದು, ನಿಖರ ಕಾಲಮಾನದ ನಿರ್ಧಾರಕ್ಕಾಗಿ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಉತ್ಖನನ ಕಾರ್ಯದ ನಿರ್ದೇಶಕರಾದ ಪರಂಪರೆ ಇಲಾಖೆ ಉಪ ನಿರ್ದೇಶಕ ಆರ್. ಶೇಜೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೆಕ್ಕಲಕೋಟೆ ಪ್ರದೇಶವನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ತೆಕ್ಕಲಕೋಟೆಯಲ್ಲಿ ಉತ್ಖನನ ಏಕೆ?
ಮೈಸೂರು ಪ್ರಾಚ್ಯವಸ್ತು ಇಲಾಖೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಎಮ್ ಎಸ್ ನಾಗರಾಜ ರಾವ್, 1964 ರಲ್ಲಿ ಉತ್ಖನನ ಮಾಡಿ ತೆಕ್ಕಲಕೋಟೆ ಇತಿಹಾಸವನ್ನ ಜಗತ್ತಿಗೆ ತಿಳಿಯಪಡಿಸಿದ್ದರು. ಈ ಬಗ್ಗೆ ಖಿhe sಣoಟಿe is hiಟಟ ಜತಿeಟಟeಡಿs iಟಿ ಖಿeಞಞಚಿಟಚಿಞoಣe ಪುಸ್ತಕದಲ್ಲಿ ವಿವರಣೆಯನ್ನೂ ನೀಡಿದ್ದಾರೆ. ಈ ಪುಸ್ತಕ ಓದಿದ ಪೆÇ್ರ. ನಮಿತಾ ಎಸ್ ಸುಗಂಧಿ, ಕುತೂಹಲದಿಂದ ಸಂಶೋಧನೆಗೆ ತೆಕ್ಕಲಕೋಟೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಮೆರಿಕದ ಹಾರ್ಟ್ವಿಕ್ ವಿಶ್ವವಿದ್ಯಾಲಯ ಪೆÇ್ರ. ನಮಿತಾ ಎಸ್ ಸುಗಂಧಿ, 2019ರಲ್ಲಿ ಮೊದಲ ಬಾರಿಗೆ ತೆಕ್ಕಲಕೋಟೆಗೆ ಉತ್ಖನನಕ್ಕೆ ಬಂದಿದ್ದರು. ನಂತರ 2025 ರಲ್ಲಿ ಸಂಶೋಧನಾ ಪ್ರಬಂಧ ಸಿದ್ದಪಡಿಸಲು ಎರಡನೇ ಸಲ ಭೇಟಿ ನೀಡಿದ್ದರು. ಜೊತೆಗೆ ಒಚಿಟಿ ಚಿಟಿಜ ಇಟಿviಡಿoಟಿmeಟಿಣ – ಖಿeಞಞಚಿಟಚಿಞoಣe ಪ್ರಬಂಧ ಮಂಡನೆಯನ್ನೂ ಮಾಡಿದ್ದರು. ಪ್ರಸ್ತುತವಾಗಿ ಮೂರನೇ ಬಾರಿ ಭೇಟಿ ನೀಡಿರುವ ನಮಿತಾ, ಉತ್ಖನನ ಕಾರ್ಯದಲ್ಲಿ ನಿರತರಾಗಿದ್ದಾರೆ.